ಬ್ರೇಕಿಂಗ್ ಸುದ್ದಿ

ನೀರವ್ ಮೋದಿಯಂತಹ ನುಂಗಣ್ಣಗಳನ್ನು ಮೋದಿ ಸರ್ಕಾರ ರಕ್ಷಿಸಿದ್ದು ಹೇಗೆ?

ಭಾರತದ ಜನಸಾಮಾನ್ಯರ ಬರೋಬ್ಬರಿ 14,500 ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದು, ದೇಶದಿಂದ ಅನಾಯಾಸವಾಗಿ ಓಡಿಹೋದ ವಜ್ರವ್ಯಾಪಾರಿ ನೀರವ್ ಮೋದಿ ನೆಮ್ಮದಿಯಾಗೇ ಜೀವನ ನಡೆಸುತ್ತಿದ್ದಾನೆ ಎಂಬುದು ವಾಸ್ತವ. ಈ ನೆಲದಲ್ಲಲ್ಲ, ಇನ್ನೊಂದು ನಾಡಲ್ಲಷ್ಟೇ! ನಮಗೆ ಅನ್ನವಿಕ್ಕುವ ರೈತರು ಕೃಷಿಗೆಂದು ಪಡೆದ ಹತ್ತಾರು ಸಾವಿರ ರೂಪಾಯಿಗಳ ಸಾಲವನ್ನು ತೀರಿಸಲಾರದೆ ಸಾವಿಗೆ ಶರಣಾಗುತ್ತಿದ್ದಾರೆ, ಅವರ ಸಣ್ಣಪುಟ್ಟ ಮನೆಗಳೂ ಜಪ್ತಿಯಾಗುತ್ತವೆ! ಉಸಿರಾಡುತ್ತಿರುವ ರೈತರ ಬದುಕು ನರಕವಾಗುತ್ತದೆ... ರೈತರ ಸಾಲ ಮನ್ನಾ ಮಾಡುವುದು ನಮ್ಮ ಸರ್ಕಾರದ ನೀತಿ ಅಲ್ಲ ಎಂದು ಹಣಕಾಸು ಸಚಿವ ಅರುಣ್ ಜೈಟ್ಲಿ ಹೇಳುತ್ತಾರೆ.

leave a reply