ಬ್ರೇಕಿಂಗ್ ಸುದ್ದಿ

ಹಾಸನ ಲೋಕಸಭಾ ಕ್ಷೇತ್ರ: ತವರಿನ ದಿಗ್ವಿಜಯದ ಕಣದಲ್ಲಿ ಗೌಡರಿಗೆ ಈಗ ತಲೆಮಾರಿನ ತಲ್ಲಣ

ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಮತ್ತೊಂದು ಕುಡಿ, ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಕಣದಲ್ಲಿರುವ ಮಂಡ್ಯ ಲೋಕಸಭಾ ಕ್ಷೇತ್ರ, ತಾರಾ ವರ್ಚಸ್ಸಿನ ಕದನದ ಕಾರಣಕ್ಕೆ ಸದ್ಯ ಇಡೀ ರಾಜ್ಯದ ಗಮನ ಸೆಳೆದಿದ್ದರೆ, ಗೌಡರ ಕುಟುಂಬದ ಪ್ರತಿಷ್ಠೆಯ ಕಾರಣಕ್ಕೆ ಹಾಸನ ಗಮನ ಸೆಳೆದಿದೆ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿಯ ಎ ಮಂಜು ನಡುವಿನ ನೇರ ಹಣಾಹಣಿಯಲ್ಲಿ, ಜೆಡಿಎಸ್ ನ್ನು ಪಕ್ಷದ ಖಾನ್ ದಾನ್ ನೆಲೆಯಲ್ಲೇ ಬಗ್ಗುಬಡಿಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.

leave a reply