ಬ್ರೇಕಿಂಗ್ ಸುದ್ದಿ

ಮಂಡ್ಯ ಲೋಕಸಭಾ ಕ್ಷೇತ್ರ; ನೇರ ಹಣಾಹಣಿಯ ಕಣದಲ್ಲಿ ಕೊನೇ ಕ್ಷಣದ ಕರಾಮತ್ತೇ ನಿರ್ಣಾಯಕ!

ರೈತ ಆತ್ಮಹತ್ಯೆ, ಕಬ್ಬು ಬೆಳೆ ಸಂಕಷ್ಟ, ಹೆಣ್ಣು ಭ್ರೂಣ ಹತ್ಯೆ, ಮರ್ಯಾದಾ ಹತ್ಯೆ, ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ಕ್ಷೇತ್ರದ ಜ್ವಲಂತ ವಿಷಯಗಳಾವೂ ಈ ಬಾರಿಯ ಚುನಾವಣೆಯಲ್ಲಿ ಚರ್ಚೆಗೆ ಬಂದಿಲ್ಲ. ಸದ್ಯಕ್ಕೆ ಮಂಡ್ಯದಲ್ಲಿ ಪ್ರತಿಧ್ವನಿಸುತ್ತಿರುವುದು ಸುಮಲತಾ ಗೌಡತಿಯೇ ಅಲ್ಲವೇ ಎಂಬುದು ಮತ್ತು ಜೋಡೆತ್ತುಗಳ ಕುರಿತ ಜಟಾಪಟಿ. ‘ಮಂಡ್ಯದ ಸೊಸೆ’ ವರ್ಸಸ್ ‘ಜಾತಿ ಮಗ’ ಎಂಬುದರ ಮೇಲೆಯೇ ಇಡೀ ಚುನಾವಣೆಯ ಚರ್ಚೆ ನಿಂತಿದ್ದು, ಎಲ್ಲೆಡೆ ಸುಮಲತಾ ಜಾತಿ ಮತ್ತು ನಿಖಿಲ್ ಕುಟುಂಬ ರಾಜಕಾರಣವೇ ಜೋರು ಸದ್ದು ಮಾಡುತ್ತಿವೆ.

leave a reply