ಆಂಧ್ರಪ್ರದೇಶದಲ್ಲಿ 372 ದೋಷಪೂರಿತ ಇವಿಎಂಗಳು ಕಂಡುಬಂದಿದೆ. ಇದರಿಂದಾಗಿಯೇ ಇಲ್ಲಿನ ಮದನಪಲ್ಲಿ, ತಂಬಲಪಟ್ಟಿ, ತಿರುಪತಿ, ಸತ್ಯವೇಡು, ರೆಣುಗುಂಟಾ ಹಾಗೂ ಇತರ ಪ್ರದೇಶಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಲು ವಿಳಂಬವಾಗಿದೆ.
ಮರುಚನಾವಣೆಗೆ ಚಂದ್ರಬಾಬು ನಾಯ್ಡು ಮನವಿ
ಆಂಧ್ರಪ್ರದೇಶದಲ್ಲಿಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆ ವೇಳೆ ಹಲವು ಮತಗಟ್ಟೆಗಳ ಇವಿಎಂ ಯಂತ್ರಗಳಲ್ಲಿ ದೋಷಕಂಡುಬಂದಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವಿಎಂಗಳಲ್ಲಿ ದೋಷ ಕಂಡುಬಂದ ಪ್ರದೇಶಗಳಲ್ಲಿ ಮರು ಚುನಾವಣೆ ನಡೆಸಲು ಚುನಾವಣಾ ಆಯುಕ್ತರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
“ಇವಿಎಂಗಳಲ್ಲಿ ದೋಷಕಂಡುಬಂದ ಮತಗಟ್ಟೆ ಹಾಗೂ 9.39ಕ್ಕೆ ಮತದಾನ ಆರಂಭವಾಗದ ಮತಗಟ್ಟೆಗಳಲ್ಲಿ ಮತದಾರರು ಮತ ಹಾಕದೇ ಹಿಂದಿರುಗಿದ್ದಾರೆ. ಪುನಃ ಮತದಾನ ಪ್ರಕ್ರಿಯೆ ಆರಂಭವಾದರು ಅವರು ಮತದಾನ ಮಾಡುವುದಿಲ್ಲ. ಆದ್ದರಿಂದ ಇಂಥ ಮತಗಟ್ಟೆಗಳಲ್ಲಿ ಮರುಚುನಾವಣೆ ನಡೆಸಬೇಕು ಎಂದು ಚಂದ್ರಬಾಬು ನಾಯ್ಡು ಅವರು ಭಿನ್ನವಿಸಿದ್ದಾರೆ.
ಇವಿಎಂ ಧ್ವಂಸ
ಆಂಧ್ರಪ್ರದೇಶದ ಅನಂತಪುರದಲ್ಲಿ ಜನಸೇನಾ ಪಕ್ಷದ ಎಂಎಲ್ಎ ಅಭ್ಯರ್ಥಿ ಮತಯಂತ್ರ ಸರಿಯಾಗಿ ಕೆಲಸ ಮಾಡದಿರುವುದು ಕಂಡು ಆಕ್ರೋಶಗೊಂಡು ಇವಿಎಂ ಯಂತ್ರವನ್ನು ಎತ್ತಿಹಾಕಿ ಪುಡಿಗಟ್ಟಿದ್ದಾರೆ. ನಂತರ ಇನ್ನಷ್ಟು ಇವಿಎಂಗಳನ್ನು ನಾಶಗೊಳಿಸುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಇದೀಗ ಜನಸೇನಾ ಪಕ್ಷದ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
#WATCH Jana Sena MLA candidate Madhusudhan Gupta smashes an Electronic Voting Machine (EVM) at a polling booth in Gooty, in Anantapur district. He has been arrested by police. #AndhraPradesh pic.twitter.com/VoAFNdA6Jo
— ANI (@ANI) April 11, 2019