ಬ್ರೇಕಿಂಗ್ ಸುದ್ದಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಎತ್ತಿನಹೊಳೆ ನೀರು ಹರಿಯದಿದ್ದರೂ, ಮೊಯ್ಲಿ ಬೆವರು ಇಳಿಯುತ್ತಿದೆ!

ಬಿಜೆಪಿಯಿಂದ ಕಣಕ್ಕಿಳಿದಿರುವ ಬಿ ಎನ್ ಬಚ್ಚೇಗೌಡರು ಈ ಬಾರಿ ಒಕ್ಕಲಿಗ ಜಾತಿ ಮತಗಳಷ್ಟೇ ಅಲ್ಲದೆ, ‘ಮತ್ತೊಮ್ಮೆ ಮೋದಿ’ ಅಲೆಯ ಮೇಲೆ ಬಹುಸಂಖ್ಯಾತ ಯುವ ಸಮುದಾಯವನ್ನು ಸೆಳೆಯುತ್ತಿದ್ದಾರೆ. ಜೊತೆಗೆ ಎರಡು ಅವಧಿಗೆ ಕ್ಷೇತ್ರದ ಚುಕ್ಕಾಣಿ ಹಿಡಿದಿದ್ದ ಮೊಯ್ಲಿ ಅವರ ವೈಫಲ್ಯಗಳ ಹಿನ್ನೆಲೆಯಲ್ಲಿ ಎದ್ದಿರುವ ಆಡಳಿತ ವಿರೋಧಿ ಅಲೆ ಕೂಡ ಬಚ್ಚೇಗೌಡರ ಪರವಾಗೇ ಕೆಲಸ ಮಾಡಲಿದೆ ಎಂಬ ಮಾತುಗಳಿವೆ. ಹಾಗಾಗಿ ಈ ಬಾರಿ ಮೊಯ್ಲಿ ಅವರಿಗೆ ಕಣ ಕಠಿಣ ಸವಾಲು ಒಡ್ಡಿದೆ.

leave a reply