ಬ್ರೇಕಿಂಗ್ ಸುದ್ದಿ

ಮಾಲೆಗಾಂವ್ ಸ್ಫೋಟದ ತನಿಖೆ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆರೆಸ್ಸೆಸ್ ಮುಖಂಡ ಸುರೇಶ್ (ಭಯ್ಯಾ) ಬರೆದ ಪತ್ರ  

ಬಿಜೆಪಿಯು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಭಯೋತ್ಪಾದಕಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ತನ್ನ ಚುನಾವಣಾ ಅಭ್ಯರ್ಥಿಯಾಗಿ ಘೋಷಿಸಿದೆ. ರೈಲು ಸ್ಫೋಟ ಪ್ರಕರಣದಲ್ಲಿ ಬಾಂಬ್ ಸ್ಫೋಟಿಸಲು ಈಕೆಯ ಮೋಟಾರ್ ಬೈಕ್ ನ್ನೇ ಬಳಸಲಾಗಿದ್ದನ್ನು ಪತ್ತೆ ಹಚ್ಚಿದ್ದ ದಕ್ಷ ಅಧಿಕಾರಿ, 26/11ರಂದು ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದ ಆಶೋಕ್ ಚಕ್ರ ವಿಜೇತ ಪೊಲೀಸ್ ಅಧಿಕಾರಿ ಹುತಾತ್ಮ ಪೊಲೀಸ್ ಹೇಮಂತ್ ಕರ್ಕರೆಯವರ ಮೇಲೆ “ಶಾಪ” ಹಾಕುವುದರಿಂದಲೇ ಈಕೆ ತನ್ನ ಚುನಾವಣಾ ಪ್ರಚಾರ ಆರಂಭಿಸಿದ್ದಾಳೆ. ಬಿಜೆಪಿ/ಆರೆಸ್ಸೆಸ್ ಗೆ ಸೇರಿದ ಅನೇಕರು ಸಾಧ್ವಿಯ ದೇಶದ್ರೋಹಿ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.  ಆದರೆ ಕೆಲವು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಬಿಜೆಪಿಯ ಸೈದ್ಧಾಂತಿಕ ಸಹವರ್ತಿ ಸಂಸ್ಥೆ ಆರೆಸ್ಸೆಸ್ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಮಾಲೆಗಾಂವ್ ಸ್ಫೋಟದ ಹಿನ್ನೆಲೆಯಲ್ಲಿ ಒಂದು ಪತ್ರ ಬರೆದಿತ್ತು. ಸಧ್ಯದ ಸಂದರ್ಭದಲ್ಲಿ ಆ ಪತ್ರ ಬಹಳ ಪ್ರಸ್ತುತ ಎನಿಸಿದ್ದರಿಂದ ಟ್ರೂಥ್ ಇಂಡಿಯಾ ಕನ್ನಡದಲ್ಲಿ ಪ್ರಕಟಿಸುತ್ತಿದೆ.

ಸುದ್ದಿಗೋಷ್ಠಿಯ ಮೂಲಕ ಪತ್ರವನ್ನು ಬಹಿರಂಗಪಡಿಸುತ್ತಿರುವ ಆರೆಸ್ಸೆಸ್ ಸರಕಾರ್ಯನಿರ್ವಾಹ ಸುರೇಶ್ ಜೋಶಿ (ಭಯ್ಯಾ)

leave a reply