ಬ್ರೇಕಿಂಗ್ ಸುದ್ದಿ

ಪ.ಬಂಗಾಳದಲ್ಲಿ ಪ್ರಚಾರ ಅವಧಿ ಕಡಿತ: ಮತ್ತೆ ವಿವಾದಕ್ಕೆ ಈಡಾಯ್ತು ಚುನಾವಣಾ ಆಯೋಗ

ಅಮಿತ್ ಶಾ ಮೆರವಣಿಗೆಯ ವೇಳೆಯ ಹಿಂಸಾಚಾರದ ಹಿನ್ನೆಲೆಯಲ್ಲಿ ಶಿಸ್ತು ಕ್ರಮವಾಗಿ, ಸಂವಿಧಾನದ 324 ವಿಧಿಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ಹೇಳಿದೆ. ಆದರೆ, ಘಟನೆ ನಡೆದ ಬರೋಬ್ಬರಿ 24 ತಾಸುಗಳ ಬಳಿಕ ಇಂತಹದ್ದೊಂದು ಕ್ರಮ ಕೈಗೊಂಡಿರುವ ಆಯೋಗದ ಈ ಕ್ರಮದ ಬಗ್ಗೆಯೇ ಹಲವು ಅನುಮಾನಗಳು ಎದ್ದಿದ್ದು, “ಅದು ಆಡಳಿತರೂಢ ಬಿಜೆಪಿಗೆ ಅನುಕೂಲಕರವಾಗಿ ನಡೆದುಕೊಳ್ಳುತ್ತಿದೆ. ಪ್ರಧಾನಿ ಮೋದಿಯವರ ಕೈಗೊಂಬೆಯಂತೆ ವರ್ತಿಸುತ್ತಿದೆ” ಎಂದು ಗಂಭೀರ ಆರೋಪಗಳು ಪ್ರತಿಪಕ್ಷಗಳ ಪಾಳೆಯದಿಂದ ಕೇಳಿಬಂದಿವೆ.

leave a reply