ಬ್ರೇಕಿಂಗ್ ಸುದ್ದಿ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ!

ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತುಕೊಂಡು ತಾವು ಮತ್ತೆ ಅದೇ ಸ್ಥಾನದಲ್ಲಿ ಮುಂದುವರಿಯಲಾಗದು. ಅಲ್ಲದೆ, ಗಾಂಧಿ ಕುಟುಂಬವೇ ಪಕ್ಷವನ್ನು ಮುನ್ನಡೆಸಬೇಕಾಗಿಲ್ಲ. ಅಂತಹ ಅಪವಾದ ಕೂಡ ಪಕ್ಷದ ಹಿನ್ನಡೆಗೆ ಕಾರಣವಾಗಿರಬಹುದು. ವಿರೋಧಪಕ್ಷಗಳ ಅಪಪ್ರಚಾರಕ್ಕೆ ಕೂಡ ಎಡೆಯಾಯಿತು. ಆ ಹಿನ್ನೆಲೆಯಲ್ಲಿ ತಾವು ಪಕ್ಷದ ಸಾರಥ್ಯವನ್ನು ವರ್ಗಾಯಿಸಲು ನಿರ್ಧರಿಸಿರುವುದಾಗಿ, ತಮ್ಮ ಈ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ರಾಹುಲ್ ಹೇಳಿರುವುದಾಗಿ ವರದಿಯಾಗಿದೆ.

2 Comments

  • ಕಾಂಗ್ರೆಸ್ ನಲ್ಲಿ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಿದೆ. ನೆಹರು ಕುಟುಂಬ ಬಿಟ್ಟರೆ ಕಾಂಗ್ರೆಸ್ ಗೆ ಗತಿ ಇಲ್ಲ ಎಂಬ ರೀತಿಯ ಟೀಕೆಗಳು, ಆರೋಪಗಳು ದೇಶವ್ಯಾಪಿ ವಿರೋಧಿಗಳಿಂದ ಕೇಳಿ ಬರುತ್ತಿರುವುದು ನಿಜ. ಆದರೆ, ಕಾಂಗ್ರೆಸ್ ಎಂದರೆ ಅದು ಕೇವಲ ರಾಜಕೀಯ ಪಕ್ಷವಲ್ಲ.ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಬಲಿದಾನಗೈದಿರುವ ಒಂದು ದೇಶಭಕ್ತ ಸಂಸ್ಥೆ. ಅಂಥಾ ಪಕ್ಷದ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ ರಾಹುಲ್ ಗಾಂದಿ ಅವರ ಕ್ರಮ ನೈತಿಕತೆಗೆ ಸಾಕ್ಷಿಯಾಗಿದೆ. ಅದಕ್ಕೆ ಹೇಳುವುದು ದೊಡ್ಡವರ ದೊಡ್ಡಗುಣ ಎಂದು.. ಲೋಕ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಹೊಣೆಯಲ್ಲ. ಪಕ್ಷದ ಎಲ್ಲಾ ಮುಖಂಡರು ಹೊಣೆಯಾಗುತ್ತಾರೆ. ನಿಜವಾಗಿ ಪಕ್ಷದ ಮುಖಂಡರಿಗೆ ನೈತಿಕತೆ ಇದ್ದರೆ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಎಲ್ಲರೂ ಕೈ ಜೋಡಿಸಬೇಕು.
    ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಪಕ್ಷದ ಬೆನ್ನೆಲುಬು ಆಗಿರುವುದರಿಂದ ಆ ಸಮುದಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ನಿಷ್ಟಾವಂತ ಕಾಂಗ್ರೆಸ್ಸಿಗನಾಗಿರುವ ನನ್ನ ಸಲಹೆ.

  • ಕಾಂಗ್ರೆಸ್ ನಲ್ಲಿ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಿದೆ. ನೆಹರು ಕುಟುಂಬ ಬಿಟ್ಟರೆ ಕಾಂಗ್ರೆಸ್ ಗೆ ಗತಿ ಇಲ್ಲ ಎಂಬ ರೀತಿಯ ಟೀಕೆಗಳು, ಆರೋಪಗಳು ದೇಶವ್ಯಾಪಿ ವಿರೋಧಿಗಳಿಂದ ಕೇಳಿ ಬರುತ್ತಿರುವುದು ನಿಜ. ಆದರೆ, ಕಾಂಗ್ರೆಸ್ ಎಂದರೆ ಅದು ಕೇವಲ ರಾಜಕೀಯ ಪಕ್ಷವಲ್ಲ.ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಬಲಿದಾನಗೈದಿರುವ ಒಂದು ದೇಶಭಕ್ತ ಸಂಸ್ಥೆ. ಅಂಥಾ ಪಕ್ಷದ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ ರಾಹುಲ್ ಗಾಂದಿ ಅವರ ಕ್ರಮ ನೈತಿಕತೆಗೆ ಸಾಕ್ಷಿಯಾಗಿದೆ. ಅದಕ್ಕೆ ಹೇಳುವುದು ದೊಡ್ಡವರ ದೊಡ್ಡಗುಣ ಎಂದು.
    ರಾಹುಲ್ ಗಾಂಧಿ ಅವರ ಕ್ರಮ ಸ್ವಾಗತಾರ್ಹವಾಗಿದೆ. ಚುನಾವಣೆಯ ಸೋಲಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಹೊಣೆಯಲ್ಲ. ಪಕ್ಷದ ಎಲ್ಲಾ ಮುಖಂಡರು ಹೊಣೆಯಾಗುತ್ತಾರೆ. ನಿಜವಾಗಿ ಪಕ್ಷದ ಮುಖಂಡರಿಗೆ ನೈತಿಕತೆ ಇದ್ದರೆ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಎಲ್ಲರೂ ಕೈ ಜೋಡಿಸಬೇಕು.
    ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಪಕ್ಷದ ಬೆನ್ನೆಲುಬು ಆಗಿರುವುದರಿಂದ ಆ ಸಮುದಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ನಿಷ್ಟಾವಂತ ಕಾಂಗ್ರೆಸ್ಸಿಗನಾಗಿರುವ ನನ್ನ ಸಲಹೆ.

leave a reply