ಬ್ರೇಕಿಂಗ್ ಸುದ್ದಿ

ದಿಲ್ಲಿಯ ಗೌಡರ ಗುಡುಗು ನೀಡಿದ ಚಂಡಮಾರುತದ ಮುನ್ಸೂಚನೆ ಏನು?

ಗೌಡರು ರೊಚ್ಚಿಗೆದ್ದಿದ್ದಾರೆ. ಸರ್ಕಾರ ಬಿದ್ದುಹೋದರೂ ಪರವಾಗಿಲ್ಲ, ನಾವು ನಮ್ಮ ಕೋಟಾದ ಸಚಿವ ಸ್ಥಾನಗಳನ್ನು ಪಕ್ಷೇತರರಿಗೆ ಬಿಟ್ಟುಕೊಡುವುದಿಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆಂದರೆ; ಅದರ ಅರ್ಥ ಅವರು ಈಗ ಎಲ್ಲಕ್ಕೂ ಸಜ್ಜಾಗಿದ್ದಾರೆ ಎಂದೇ. ಅಲ್ಲದೆ, ಒಂದು ಕಡೆ ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯಕ್ಕೆ ಮರು ಚಾಲನೆ ನೀಡಿರುವುದು, ಮತ್ತೊಂದು ಕಡೆ ದೊಡ್ಡ ಗೌಡರು ರಾಜಕೀಯ ಜೀವನದ ಇಳಿಗಾಲದಲ್ಲಿ ಮತ್ತೆ ರಾಜ್ಯ ಸುತ್ತಿ ಪಕ್ಷದ ಬಲವರ್ಧನೆಗೆ ಮುಂದಾಗಿರುವುದು ಕೂಡ ಅವರ ಲೆಕ್ಕಾಚಾರಗಳು ಸರಳವಿಲ್ಲ ಎಂಬುದರ ಸೂಚನೆಗಳೇ.

leave a reply