ಬ್ರೇಕಿಂಗ್ ಸುದ್ದಿ

ಜಿಂದಾಲ್ ವಿವಾದದ ನಡುವೆ ನೆನಪಾಗದ ಬ್ರಹ್ಮಿಣಿ ಸ್ಟೀಲ್ ಭೂ ಪರಭಾರೆ!

ಈಗ ಜಿಂದಾಲ್ ಗೆ 3,667 ಎಕರೆ ಭೂಮಿ ಪರಭಾರೆಯ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಆಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ. ಆದರೆ, ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಸಿಎಂ ಅವಧಿಯಲ್ಲೇ, ಅದೇ ಬಿಜೆಪಿ ಸರ್ಕಾರ ಬರೋಬ್ಬರಿ ಐದು ಸಾವಿರ ಎಕರೆ ಭೂಮಿಯನ್ನು ಅದೇ ಬಳ್ಳಾರಿ ಜಿಲ್ಲೆಯಲ್ಲಿಯೇ ಬ್ರಹ್ಮಿಣಿ ಉಕ್ಕು ಕಂಪನಿಗೆ ನೀಡಿತ್ತು ಮತ್ತು ಆ ಭೂಮಿಯನ್ನು ಆ ಕಂಪನಿಯ ಮಾಲೀಕರಾಗಿದ್ದ ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿ, ಉದ್ಯಮ ಆರಂಭಿಸುವ ಬದಲಿಗೆ ಮತ್ತೊಂದು ಕಂಪನಿಗೆ ಮಾರಾಟ ಮಾಡಿದ್ದರು ಎಂಬುದೀಗ ಮರೆತುಹೋಗಿದೆ!

leave a reply