ಬ್ರೇಕಿಂಗ್ ಸುದ್ದಿ

ದೋಸ್ತಿಗಳ ನಡುವಿನ ತೆರೆಮರೆಯ ತಂತ್ರಗಾರಿಕೆ ಕ್ಲೈಮಾಕ್ಸ್ ತಲುಪಿತೆ?

ಸಿದ್ದರಾಮಯ್ಯ ದೆಹಲಿಯಲ್ಲಿರುವಾಗಲೇ, ರಾಜ್ಯ ರಾಜಧಾನಿಯಲ್ಲಿ ಕೆಲವು ಕುತೂಹಲಕಾರಿ ಬೆಳವಣಿಗೆಗಳೂ ನಡೆದಿವೆ. ಸದ್ಯದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅವು ಕೇವಲ ಕಾಕತಾಳೀಯ ಅಲ್ಲ ಎಂಬ ಕಾರಣಕ್ಕೆ ಆ ಬೆಳವಣಿಗೆಗಳಿಗೆ ಮಹತ್ವ ಬಂದಿದೆ. ಈ ಎಲ್ಲಾ ವಿದ್ಯಮಾನಗಳ ಕೇಂದ್ರಬಿಂದು ಮಾಜಿ ಮುಖ್ಯಮಂತ್ರಿಗಳೇ ಎಂಬುದು ವಿಶೇಷ. ಅವರನ್ನೇ ಕೇಂದ್ರವಾಗಿಟ್ಟುಕೊಂಡು ಏಕ ಕಾಲಕ್ಕೆ ಹಲವು ಕಡೆಗಳಿಂದ ನಡೆಯುತ್ತಿರುವ ತಂತ್ರಗಾರಿಕೆಗಳ ಅಂತಿಮ ಫಲಿತಾಂಶ, ರಾಜ್ಯ ದೋಸ್ತಿ ಸರ್ಕಾರದ ಹಣೇಬರಹವನ್ನು ನಿರ್ಧರಿಸಲಿದೆಯೇ ಎಂಬುದು ಈಗಿನ ಕುತೂಹಲ.

leave a reply