ಬ್ರೇಕಿಂಗ್ ಸುದ್ದಿ

ಕ್ಷಿಪ್ರಗತಿಯಲ್ಲಿ ಜನಾಂದೋಲನವಾಗಿ ಹಿಗ್ಗಿದ ಶರಾವತಿ ಉಳಿಸಿ ಹೋರಾಟ!

ಹೋರಾಟಗಳು, ಚಳವಳಿಗಳು ಸತ್ತು ಹೋದವು, ಈ ಸಮಾಜದಲ್ಲಿ ಇನ್ನು ಜನಾಂದೋಲನಗಳು ಹುಟ್ಟಲಾರದು ಎಂಬಂತಹ ಸ್ಥಿತಿಯಲ್ಲಿ ಒಂದು ನದಿಗಾಗಿ, ಘಟ್ಟದ ಪರಿಸರದ ಹಿತಕ್ಕಾಗಿ, ಮಲೆನಾಡಿನ ಜನಜೀವನದ ಭವಿಷ್ಯದ ಕಾಳಜಿಗಾಗಿ ಹೊಸ ತಲೆಮಾರಿನ ಚಳವಳಿಯೊಂದು ಅತ್ಯಲ್ಪ ಕಾಲದಲ್ಲಿ ವ್ಯಾಪಕವಾಗಿ ಹರಡಿದ್ದು, ಎಲ್ಲಾ ಬಗೆಯ ತರತಮಗಳನ್ನು ಮೀರಿ ಇಡೀ ಮಲೆನಾಡಿನ ಒಕ್ಕೊರಲ ದನಿಯಾಗಿ ಶರಾವತಿ ಉಳಿಸಿ ಎಂಬುದು ಘಟ್ಟದ ಉದ್ದಕ್ಕೂ ಮೊಳಗತೊಡಗಿದೆ.

leave a reply