ಬ್ರೇಕಿಂಗ್ ಸುದ್ದಿ

ಸಂವಿಧಾನಿಕ ಬಿಕ್ಕಟ್ಟು ಉಲ್ಬಣಗೊಳಿಸಿದ ಆಪರೇಷನ್ ಕಮಲ ಕ್ಲೈಮ್ಯಾಕ್ಸ್!

ಕಳೆದ ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಲಜ್ಜೆಗೇಡಿ ರಾಜಕೀಯ ಸರ್ಕಸ್ ಇಡೀ ದೇಶದ ಗಮನ ಸೆಳೆದಿದ್ದು, ‘ಕರ್ ನಾಟಕ’ ಎಂಬ ಹಣೆಪಟ್ಟಿಯೊಂದಿಗೆ ರಾಜ್ಯ ರಾಜಕಾರಣದ ಪರಂಪರೆಯ ಘನತೆಯನ್ನೇ ಹರಾಜಿಗಿಟ್ಟಿದೆ. ದಶಕದ ಹಿಂದೆ ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣಕ್ಕೆ ಚಾಲನೆ ನೀಡಿದ ಕರ್ನಾಟಕದ ರಾಜಕಾರಣ ಈಗ ಮತ್ತೊಂದು ಹಂತಕ್ಕೆ ಜಿಗಿದಿದೆ. ಹಾಗಾಗಿ ಆಪರೇಷನ್ ಕಮಲ ಇದೀಗ ಕೇವಲ ಸರ್ಕಾರವನ್ನು ಮಾತ್ರವಲ್ಲದೆ, ಇಡೀ ಶಾಸಕಾಂಗ, ನ್ಯಾಯಾಂಗ ಮತ್ತು ರಾಜಭವನಗಳ ಘನತೆಯನ್ನೇ ಬೀದಿಗಿಟ್ಟಿದೆ!

leave a reply