ಬ್ರೇಕಿಂಗ್ ಸುದ್ದಿ

ಟಿವಿ ವಾಹಿನಿಗಳು ಪ್ರಜಾತಂತ್ರವಿರೋಧಿ ಮಾತ್ರವಲ್ಲ, ಪ್ರಜಾವಿರೋಧಿ ಕೂಡ: ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವೀಶ್ ಕುಮಾರ್

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಸಿಯಲಾಗುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗು ಪ್ರಜಾತಂತ್ರದ ಇನ್ನಿತರೆ ಮೌಲ್ಯಗಳ ವಿರುದ್ಧ ಎನ್ ಡಿ ಟಿ ವಿ ಯ ಪತ್ರಕರ್ತ ರವೀಶ್ ಕುಮಾರ್ ಅವರು ನಿರಂತರವಾಗಿ ನಿರ್ಭಿಡೆಯಿಂದ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಅವರಿಗೆ ಇತ್ತೀಚೆಗಷ್ಟೇ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಲಭಿಸಿದೆ. ಪ್ರಜಾಪ್ರಭುತ್ವ, ಸಂಸ್ಕೃತಿ ಮತ್ತು ರಾಷ್ಟ್ರದ ಕುರಿತಾಗಿ ಅವರು ರಚಿಸಿರುವ ‘The Free Voice’ ಕೃತಿಯನ್ನು ‘ಮಾತಿಗೆ ಏನು ಕಡಿಮೆ’ ಎಂಬ ಹೆಸರಿನಲ್ಲಿ ಹರ್ಷಕುಮಾರ್ ಕುಗ್ವೆ ಅವರು ಕನ್ನಡಕ್ಕೆ ತಂದಿದ್ದಾರೆ. ದೇಶದ ಮಾಧ್ಯಮಗಳ ಬಗ್ಗೆ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರನ್ನು ಕಳೆದ ವರ್ಷ National Herald ಪತ್ರಿಕೆ ಸಂದರ್ಶನ ನಡೆಸಿತ್ತು. ಅಂದು ಅವರು ಆಡಿದ್ದ ನೇರ ಮಾತುಗಳು ಇಂದಿಗೂ ಅಷ್ಟೇ ಪ್ರಸ್ತುತ ಎಂಬ ಕಾರಣದಿಂದಾಗಿ ಅದನ್ನು ಕನ್ನಡೀಕರಿಸಿ ಟ್ರುಥ್ ಇಂಡಿಯಾ ಕನ್ನಡ ಓದುಗರಿಗಾಗಿ ಪ್ರಕಟಿಸಲಾಗುತ್ತಿದೆ.

leave a reply