ಬ್ರೇಕಿಂಗ್ ಸುದ್ದಿ

ಮತ್ತೆ ಸಿಎಂ ಭೇಟಿಗೆ ಪ್ರಧಾನಿ ಮೋದಿ ನಕಾರ, ಬಿಎಸ್ ವೈಗೆ ತೀವ್ರ ಮುಖಭಂಗ

ಒಂದು ಕಡೆ ತಮಗೆ ಕವಡೆ ಕಿಮ್ಮತ್ತು ನೀಡದೇ ಇರುವ ಹೈಕಮಾಂಡ್ ಮತ್ತು ಪ್ರಧಾನಿ ಮೋದಿ, ಮತ್ತೊಂದು ಕಡೆ ಸ್ವರ್ಗವನ್ನೇ ಧರೆಗಿಳಿಸುವ ಭರವಸೆ ನೀಡಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದು ಈಗ ತಾವು ಆತ್ಮಹತ್ಯೆಯ ದಾರಿ ಹಿಡಿದಿರುವಾಗಲೂ ಗೋಳು ಕೇಳಲಾರದ, ದುಗ್ಗಾಣಿ ನೆರವು ನೀಡಲಾಗದ ತಮ್ಮ ವೈಫಲ್ಯದ ಬಗ್ಗೆ ಆಕ್ರೋಶಗೊಂಡಿರುವ ಸಂತ್ರಸ್ತರು. ಹೀಗೆ ಅತ್ತ ಧರಿ, ಇತ್ತ ಪುಲಿ ಎಂಬ ಸ್ಥಿತಿಯಲ್ಲಿ ಸಿಲುಕಿರುವ ಸಿಎಂ ಯಡಿಯೂರಪ್ಪ, ಪದೇಪದೆ ಮುಖಭಂಗ, ಮುಜುಗರ, ಅವಮಾನದಿಂದ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ.

leave a reply