ಬ್ರೇಕಿಂಗ್ ಸುದ್ದಿ

ಶಿಥಿಲ ಸರ್ಕಾರ, ಪ್ರತಿಪಕ್ಷಗಳ ಕುರ್ಚಿ ಕಾದಾಟದ ನಡುವೆ ಸಂತ್ರಸ್ತರ ಗತಿ ಅಯೋಮಯ!

ನೂರು ದಿನದಲ್ಲಿ ಅಭಿವೃದ್ಧಿಯ ಪರ್ವವನ್ನೇ ಧರೆಗಿಳಿಸುವ ಭರವಸೆ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಶೈತ್ಯಾಗಾರಕ್ಕೆ ಸೇರಿಹೋಗಿದೆ. ಸರ್ಕಾರವನ್ನು ಬಡಿದೆಚ್ಚರಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ಪ್ರತಿಪಕ್ಷಗಳು ಕೂಡ ಜನರ ನಡುವೆ ಗೈರಾಗಿವೆ. ಜನರ ಸಂಕಷ್ಟವನ್ನೇ ಮುಂದಿಟ್ಟುಕೊಂಡು ಆಡಳಿತ ಪಕ್ಷ, ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಳ್ಳಬೇಕಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆರಡೂ, ಆ ಹೊಣೆಗಾರಿಕೆ ಮರೆತು ತಮ್ಮದೇ ಕುರ್ಚಿ ಕಾದಾಟದಲ್ಲಿ ಮೈಮರೆತಿವೆ ಎಂಬುದು ಕಟುವಾಸ್ತವ.

leave a reply