ಬ್ರೇಕಿಂಗ್ ಸುದ್ದಿ

ಕೇಂದ್ರದಿಂದ ಪರಿಹಾರ ತರಲಾಗದ ಸರ್ಕಾರ, ಇಲಾಖಾ ಅನುದಾನಕ್ಕೇ ಕೈಹಾಕಿತು!

ಒಂದು ಕಡೆ; ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರಿ ಇಲಾಖೆಗಳ ಬಜೆಟ್ ಅನುದಾನವನ್ನೇ ಬಾಚಿಕೊಳ್ಳುವಷ್ಟು ದಿವಾಳಿ ಎದ್ದ ಸರ್ಕಾರ, ಮತ್ತೊಂದು ಕಡೆ ಪರಿಸ್ಥಿತಿಯ ಭೀಕರತೆಯನ್ನು ಅರುಹಿ ಕೇಂದ್ರ ನಾಯಕರ ಮನವೊಲಿಸಿಯೋ, ಇಲ್ಲವೇ ಒತ್ತಡ ಹೇರಿಯೋ ಅನುದಾನ ತರಲಾಗದ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಅದು ಸಾಲದು ಎಂಬಂತೆ ಆಡಳಿತ ಪಕ್ಷದ ಸಂಸದರು ಮತ್ತು ಸರ್ಕಾರದ ಭಾಗವಾಗಿರುವ ಸಚಿವರು ತಮ್ಮ ಹೊಣೆ ಮರೆತು ಉದ್ಧಟತನದ, ಧಿಮಾಕಿನ ಮತ್ತು ಅವಿವೇಕಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ಸ್ವತಃ ಸಿಎಂ, ಸಂತ್ರಸ್ತರಿಗೆ ನೀಡಲು ಹಣವಿಲ್ಲ ಎನ್ನುತ್ತಲೇ ಚುನಾವಣಾ ಗಿಮಿಕ್ ಭಾಗವಾಗಿ ಅನುಭವ ಮಂಟಪದಂತಹ ಅಪ್ರಯೋಜಕ ಯೋಜನೆಯೊಂದಕ್ಕೆ ಕೋಟಿಕೋಟಿ ಅನುದಾನ ಘೋಷಿಸುತ್ತಿದ್ದಾರೆ.

leave a reply