ಬ್ರೇಕಿಂಗ್ ಸುದ್ದಿ

ಮತಾಂಧತೆಯ ಅಮಲಿನ ಚುನಾವಣೆ ಗೆಲುವು ಮತ್ತು ಕರ್ನಾಟಕದ ಪ್ರವಾಹ ಕಲಿಸಿದ ಪಾಠ

ಮತಾಂಧತೆಯ ಅಮಲಿನ ಮೇಲೆ ಚುನಾವಣೆಗಳನ್ನು ಗೆಲ್ಲುವುದು ಸರಳ ಇರುವಾಗ ನೆರೆ ಬರಲಿ, ಬರ ಇರಲಿ ಜನರ ಕಷ್ಟಕ್ಕೆ ಸ್ಪಂದಿಸುವ ಜರೂರು ಏನಿದೆ ಎಂಬುದು ಬಿಜೆಪಿಯ ಧೋರಣೆ. ಪ್ರಬಲ ಪ್ರತಿಪಕ್ಷ ಕೂಡ ಇರಲಾರದ, ದೃಢ ಸಾಮಾಜಿಕ, ರಾಜಕೀಯ ಚಳವಳಿಗಳೂ ತಲೆ ಎತ್ತಲಾರದ ಒಂದು ವ್ಯವಸ್ಥೆಯಲ್ಲಿ ಸರ್ಕಾರವೊಂದು ಹೇಗೆ ಜನದ್ರೋಹಿಯಾಗಿ, ತನ್ನನ್ನು ಆರಿಸಿ ಕಳಿಸಿದ ಮತದಾರನ್ನೇ ಜೀತದಾಳುಗಳಂತೆ ನಡೆಸಿಕೊಳ್ಳುತ್ತದೆ, ಕುರಿಗಳಂತೆ ಜನರನ್ನು ಕಾಣುತ್ತದೆ ಎಂಬುದಕ್ಕೆ ಕರ್ನಾಟಕದ ಈ ಪ್ರವಾಹ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಸ್ಪಂದಿಸಿದ ರೀತಿಯೇ ಜ್ವಲಂತ ಉದಾಹರಣೆ.

leave a reply