ಬ್ರೇಕಿಂಗ್ ಸುದ್ದಿ

‘ಸಾವರ್ಕರ್ ಚುನಾವಣೆ’: ಈ ಬಾರಿಯೂ ಸೆಣೆಸುವ ಮುನ್ನವೇ ಸಮರ ಗೆದ್ದುಬಿಟ್ಟಿತೇ ಬಿಜೆಪಿ?

ಈ ಬಾರಿ ಮಹಾರಾಷ್ಟ್ರ- ಹರ್ಯಾಣ ಚುನಾವಣಾ ಕಣದಲ್ಲಿ ಬಿಜೆಪಿಗೆ, ದೇಶದ ಜನಸಾಮಾನ್ಯರ ವಾಸ್ತವಿಕ ಬದುಕಿನ ಕಡು ಕಷ್ಟ, ಸಂಕಷ್ಟಕ್ಕೆ ಕಾರಣವಾದ ತನ್ನ ಸಾಲು ಸಾಲು ವೈಫಲ್ಯಗಳ ವಿರುದ್ಧದ ಜನಾಕ್ರೋಶವನ್ನು ಎದುರಿಸುವ ಸವಾಲು ಎದುರಾಗಿತ್ತು. ಆದರೆ, ಜನಸಾಮಾನ್ಯರ ನಿತ್ಯದ ಬದುಕಿಗೆ ಯಾವ ರೀತಿಯಲ್ಲೂ ಸಂಬಂಧವೇ ಪಡದ ‘ಭಾರತ ರತ್ನ’ ವಿಷಯವನ್ನು ಮುಂದುಮಾಡುವ ಮೂಲಕ ಬಿಜೆಪಿ ಬಹಳ ಸಲೀಸಾಗಿ ಎಲ್ಲವನ್ನೂ ತಿರುವುಮುರುವು ಮಾಡಿಬಿಟ್ಟಿದೆ. ಪ್ರತಿಪಕ್ಷಗಳೂ ಅದರ ಆ ಚಾಣಾಕ್ಷ ಮೋಸದಬಲೆಯಲ್ಲಿ ಸಿಲುಕಿಬಿಟ್ಟಿವೆ.

leave a reply