ಬ್ರೇಕಿಂಗ್ ಸುದ್ದಿ

ಎನ್ ಕೌಂಟರ್ ಸಂಭ್ರಮಿಸಿದವರು ಉನ್ನಾವ್ ಸಾವಿಗೆ ಮೌನ ವಹಿಸಿದ್ದು ಯಾಕೆ?

ಆಡಳಿತ ವ್ಯವಸ್ಥೆ ಪರೋಕ್ಷವಾಗಿ ಗುರುತುಹಾಕಿರುವ, ಒಪ್ಪಿತ ಮಾನದಂಡಗಳ ಅಡಿಯಲ್ಲಿ ಎಲ್ಲರನ್ನೂ ತರುವ ಮತ್ತು ತನ್ನ ಮೂಗಿನ ನೇರಕ್ಕೆ ಬಗ್ಗಿಸುವ ಪ್ರಯತ್ನ ಸರ್ಕಾರದ ವಿವಿಧ ಅಂಗಗಳ ಮೂಲಕ ನಡೆಯುತ್ತಿದೆ. ಅದು ನೆರೆ ಪರಿಹಾರದಿಂದ ‘ನ್ಯಾಯ’ ಪರಿಹಾರದವರೆಗೆ ವಿವಿಧ ಹಂತದಲ್ಲಿ, ವಿವಿಧ ಸ್ವರೂಪದಲ್ಲಿ ಜಾರಿಯಲ್ಲಿದೆ! ಅಂತಹ ಪ್ರಯತ್ನಗಳಿಗೆ ಸಾರ್ವಜನಿಕ ಮನ್ನಣೆ ಗಳಿಸಿಕೊಳ್ಳಲು ಪ್ರಮುಖವಾಗಿ ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯ ಉತ್ಪಾದನೆಯ ಕಸರತ್ತುಗಳೂ ನಡೆಯುತ್ತಿವೆ.

leave a reply