ಬ್ರೇಕಿಂಗ್ ಸುದ್ದಿ

ಶೃಂಗೇರಿ ಸಮ್ಮೇಳನ ತಡೆಯುವ ಸಚಿವ ಸಿಟಿ ರವಿ ಪ್ರಯತ್ನ ಕೈಗೂಡದು!

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಇದೀಗ ರಾಜ್ಯ- ರಾಷ್ಟ್ರಮಟ್ಟದ ಸುದ್ದಿಯಾಗಿದೆ. ಭಿನ್ನ ಸೈದ್ಧಾಂತಿಕ ಲೇಖಕರೊಬ್ಬರು ಅಧ್ಯಕ್ಷರಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಬಿಜೆಪಿ ಸರ್ಕಾರ ಮತ್ತು ಅದರ ನಾಯಕರುಗಳು ಇಡೀ ಸಮ್ಮೇಳನವನ್ನೇ ರದ್ದು ಮಾಡಲು ಇನ್ನಿಲ್ಲದ ದುಸ್ಸಾಹಸಗಳನ್ನು ಮಾಡುತ್ತಲೇ ಇದ್ದಾರೆ. ಸಾಹಿತ್ಯ ಪರಿಷತ್ತನ್ನು ತಮ್ಮ ಪರಿವಾರದ ತೊತ್ತಾಗಿ ಮಾಡಿಕೊಳ್ಳುವ ಹುನ್ನಾರದ ಈ ಕೃತ್ಯಕ್ಕೆ ನಾಡಿನ ಉದ್ದಗಲಕ್ಕೆ ಸಾಹಿತಿ-ಕಲಾವಿದರು, ಕನ್ನಡಪರ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿವೆ. ಇಂತಹ ಎಲ್ಲಾ ಕುತಂತ್ರಗಳ ಹೊರತಾಗಿಯೂ ನಾಳೆ(ಜ.10) ಶೃಂಗೇರಿಯಲ್ಲಿ ನಿಗದಿಯಂತೆ ಸಮ್ಮೇಳನ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಪತ್ರಕರ್ತ, ಜನಪರ ಹೋರಾಟಗಾರ ಹರ್ಷಕುಮಾರ್ ಕುಗ್ವೆ ಅವರ ಅಭಿಪ್ರಾಯ ಇಲ್ಲಿದೆ..

leave a reply